ಫ್ಯಾಕ್ಟ್ಚೆಕ್: ಪಹಲ್ಗಾಮ್ ದಾಳಿಯ ನಂತರ ಪಶ್ಚಿಮ ಬಂಗಾಳದ ವೈದ್ಯರೊಬ್ಬರು ಮುಸ್ಲಿಂ ರೋಗಿಗೆ ಚಿಕಿತ್ಸೆ ನೀಡಲು ನಿರಾಕರಿಸಿಲ್ಲ
ಪಹಲ್ಗಾಮ್ ದಾಳಿಯ ನಂತರ ಪಶ್ಚಿಮ ಬಂಗಾಳದ ವೈದ್ಯರೊಬ್ಬರು ಮುಸ್ಲಿಂ ರೋಗಿಗೆ ಚಿಕಿತ್ಸೆ ನೀಡಲು ನಿರಾಕರಿಸಿಲ್ಲ

Claim :
ಪಹಲ್ಗಾಮ್ ದಾಳಿಯ ನಂತರ ಪಶ್ಚಿಮ ಬಂಗಾಳದ ವೈದ್ಯರೊಬ್ಬರು ಮುಸ್ಲಿಂ ರೋಗಿಗೆ ಚಿಕಿತ್ಸೆ ನೀಡಲು ನಿರಾಕರಿಸಿದರುFact :
ವಿಡಿಯೋವನ್ನು ಎಡಿಟ್ ಮಾಡಿ ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ
ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ಜನರು ಪ್ರಾಣ ಕಳೆದುಕೊಂಡ ನಂತರ ದೇಶಾದ್ಯಂತ ಪಾಕಿಸ್ತಾನದ ವಿರುದ್ಧ ಪ್ರತೀಕಾರದ ಮಾತು ಕೇಳಿ ಬರುತ್ತಿದೆ.. ಇದಾದ ನಂತರ, ಈಗ ಸಾಮಾಜಿಕ ಮಾಧ್ಯಮದಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದೆ.
ಪಶ್ಚಿಮ ಬಂಗಾಳದ ಮಹಿಳಾ ಸ್ತ್ರೀರೋಗ ತಜ್ಞೆ ಡಾ. ಸಿ.ಕೆ.ಸರ್ಕಾರ್ ಅವರು ಮುಸ್ಲಿಂ ಎಂಬ ಕಾರಣಕ್ಕಾಗಿ ಖಾತುನ್ ಅವರಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಮಾಧ್ಯಮದಲ್ಲಿ ಫೋಟೋ ಮತ್ತು ಆಡಿಯೋ ಸಂದೇಶವೊಂದು ಪ್ರಸಾರವಾದ ನಂತರ ವಿವಾದ ಭುಗಿಲೆದ್ದಿತು. . ಈ ಘಟನೆಯು ವ್ಯಾಪಕ ಆಕ್ರೋಶ, ಹತಾಶೆಯನ್ನು ಹುಟ್ಟುಹಾಕಿದೆ ಮತ್ತು ವೈದ್ಯಕೀಯ ವೃತ್ತಿಪರರ ನಿಷ್ಪಕ್ಷಪಾತ ಮತ್ತು ನೈತಿಕತೆಯ ಬಗ್ಗೆ ಗಂಭೀರ ಕಳವಳಗಳನ್ನು ಹುಟ್ಟುಹಾಕಿದೆ.
ಏಪ್ರಿಲ್ 26, 2025ರಂದು ಎಕ್ಸ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼThis is Doctor C.K. Sarkar, a gynecologist. She refused to treat a pregnant Muslim woman because of Pahalgam terrorist att@ck. This is unethical and must not be ignored. Requesting IMA/WB govt to cancel her license immediately. She doesn't deserve to be a doctor.ʼ ಎಂಬ ಶಿರ್ಷಿಕೆಯೊಂದಿಗೆ ಡಾಕ್ಟರ್ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಇವರು ವೈದ್ಯೆ ಸಿ.ಕೆ. ಸರ್ಕಾರ್, ಸ್ತ್ರೀರೋಗ ತಜ್ಞೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕಾರಣದಿಂದಾಗಿ ಅವರು ಗರ್ಭಿಣಿ ಮುಸ್ಲಿಂ ಮಹಿಳೆಗೆ ಚಿಕಿತ್ಸೆ ನೀಡಲು ನಿರಾಕರಿಸಿದರು. ಇದು ಅನೈತಿಕ ಮತ್ತು ಈ ವಿಷಯವನ್ನು ನಿರ್ಲಕ್ಷಿಸಬಾರದು. ಐಎಂಎ/ಡಬ್ಲ್ಯೂಬಿ ಸರ್ಕಾರವು ಅವರ ಪರವಾನಗಿಯನ್ನು ತಕ್ಷಣವೇ ರದ್ದುಗೊಳಿಸುವಂತೆ ವಿನಂತಿಸುತ್ತಿದೆ. ಈಕೆ ವೈದ್ಯೆಯಾಗಲು ಅರ್ಹರಲ್ಲʼ ಎಂಬ ಶೀರ್ಷಿಕೆಯೊಂದಿಗಿರುವುದನ್ನು ನಾಲಿಲ್ಲಿ ನೋಡಬಹುದು.
ವೈರಲ್ ಆದ ಪೊಸ್ಟ್ನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಏಪ್ರಿಲ್ 27,2025ರಂದು ಎಕ್ಸ್ ಬಳಕೆದಾರರೊಬ್ಬರು ʼ"तुम्हारे धर्म के लोग मेरे धर्म के लोगों को मार रहे हैं, तुम लोग हत्यारे हो।. तुम्हारे पति को हिंदुओं द्वारा मार दिया जाना चाहिए, ताकि तुम हिंदुओं के दर्द को महसूस कर सको. तुम लोगों को अपने इलाज के लिए केवल मदरसों और मस्जिदों में जाना चाहिए, जहां मुसलमानों को आतंकवादी बनना सिखाया जाता है।" कोलकाता गर्भवती मुस्लिम महिला महफूज़ा खातून को लम्वे समय से स्त्री रोग विशेषज्ञ डॉ. सीके सरकार देख रही थीं लेकिन पहलगाम घटना के बाद महिला डॉक्टर ने उपचार देने से इनकार कर दिया। डॉक्टर ने कहा, "कश्मीर की घटना के बाद, मैं किसी भी मुस्लिम मरीज को देखने नहीं जा रही हूँ," ಎಂಬ ಶೀರ್ಷಿಕೆಯೊಂದಿಗೆ ಪೊಸ್ಟ್ ಮಾಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼ"ನಿಮ್ಮ ಧರ್ಮದ ಜನರು ನನ್ನ ಧರ್ಮದ ಜನರನ್ನು ಕೊಲ್ಲುತ್ತಿದ್ದಾರೆ, ನೀವು ಕೊಲೆಗಾರರು. ನಿಮ್ಮ ಗಂಡನನ್ನು ಹಿಂದೂಗಳೇ ಕೊಲ್ಲಬೇಕು, ಇದರಿಂದ ನೀವು ಹಿಂದೂಗಳ ನೋವನ್ನು ಅನುಭವಿಸಬಹುದು. ನೀವು ಚಿಕಿತ್ಸೆಗಾಗಿ ಮದರಸಾಗಳು ಮತ್ತು ಮಸೀದಿಗಳಿಗೆ ಮಾತ್ರ ಹೋಗಬೇಕು, ಅಲ್ಲಿ ಮುಸ್ಲಿಮರನ್ನು ಭಯೋತ್ಪಾದಕರಾಗಲು ಕಲಿಸಲಾಗುತ್ತದೆ. ಕೋಲ್ಕತ್ತಾದಲ್ಲಿ, ಗರ್ಭಿಣಿ ಮುಸ್ಲಿಂ ಮಹಿಳೆ ಮಹ್ಫುಜಾ ಖಾತೂನ್ ದೀರ್ಘಕಾಲದವರೆಗೆ ಸ್ತ್ರೀರೋಗತಜ್ಞ ಡಾ. ಸಿ.ಕೆ. ಸರ್ಕಾರ್ ಅವರ ಆರೈಕೆಯಲ್ಲಿದ್ದರು, ಆದರೆ ಪಹಲ್ಗಾಮ್ ಘಟನೆಯ ನಂತರ, ಮಹಿಳಾ ವೈದ್ಯರು ಚಿಕಿತ್ಸೆ ನೀಡಲು ನಿರಾಕರಿಸಿದರು. ವೈದ್ಯರು, "ಕಾಶ್ಮೀರ ಘಟನೆಯ ನಂತರ, ನಾನು ಯಾವುದೇ ಮುಸ್ಲಿಂ ರೋಗಿಗಳನ್ನು ನೋಡಲು ಹೋಗುವುದಿಲ್ಲ" ಎಂದು ಹೇಳಿದರು ಎಂದು ಶೀರ್ಷಿಕೆಯನ್ನು ನೀಡಿರುವುದನ್ನು ನೋಡಬಹುದು. (ಆರ್ಕೈವ್)
ಏಪ್ರಿಲ್ 25, 2025ರಂದು ಫೇಸ್ಬುಕ್ ಬಳಕೆದಾರರೊಬ್ಬರು ʼA pregnant Muslim woman in Kolkata was allegedly denied medical treatment by a doctor who cited the recent militant attack in Pahalgam as the reason for the refusalʼ ಎಂಬ ಶೀರ್ಷಿಕೆಯೊಂದಿಗೆ ಪೊಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಶ್ಚಿಮ ಬಂಗಾಳದ ಮಹಿಳಾ ಸ್ತ್ರೀರೋಗ ತಜ್ಞೆ ಡಾ. ಸಿ.ಕೆ. ಸರ್ಕಾರ್ ಧಾರ್ಮಿಕ ಪಕ್ಷಪಾತದಿಂದಾಗಿ ಮುಸ್ಲಿಂ ರೋಗಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆʼ ಎಂದು ಬರೆದಿರುವುದನ್ನು ನೋಡಬಹುದು. (ಆರ್ಕೈವ್)
ಏಪ್ರಿಲ್ 29, 2025ರಂದು ʼರೇಡಿಯನ್ಸ್ ವ್ಯೂಸ್ ವೀಕ್ಲೀʼ ಎಂಬ ವೆಬ್ಸೈಟ್ನಲ್ಲಿ ʼKolkata Doctor Refuses Treatment to Pregnant Muslim Woman, Citing Pahalgam Attackʼ ಎಂಬ ಶಿರ್ಷಿಕೆಯೊಂದಿಗೆ ವರದಿ ಮಾಡಿರುವುದನ್ನು ನಾವಿಲ್ಲಿ ನೋಡಬಹುದು. ವರದಿಯಲ್ಲಿ ಹೇಳುತ್ತಿರುವುದೇನೆಂದರೆ, ʼಕೋಲ್ಕತ್ತಾದ ಕಸ್ತೂರಿ ದಾಸ್ ಸ್ಮಾರಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಗರ್ಭಿಣಿ ಮುಸ್ಲಿಂ ಮಹಿಳೆಯೊಬ್ಬರಿಗೆ ದೀರ್ಘಕಾಲದಿಂದ ಸ್ತ್ರೀರೋಗ ತಜ್ಞೆಯಾಗಿದ್ದ ಡಾ.ಸಿ.ಕೆ ಸರ್ಕಾರ್ ಅವರು ವೈದ್ಯಕೀಯ ಚಿಕಿತ್ಸೆ ನಿರಾಕರಿಸಿದ್ದಾರೆ ಎಂಬ ಆರೋಪ ಧಾರ್ಮಿಕ ತಾರತಮ್ಯದ ಆಘಾತಕಾರಿ ಪ್ರದರ್ಶನವಾಗಿದೆ. ಕಾಶ್ಮೀರದ ಪಹಲ್ಗಾಮ್ ದಾಳಿಯ ನಂತರ ವೈದ್ಯರು ಕೋಮುವಾದಿ ಮತ್ತು ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ವರದಿಯಾಗಿದೆ. ಕಳೆದ ಏಳು ತಿಂಗಳಿನಿಂದ ಡಾ. ಸರ್ಕಾರ್ ಅವರ ಆರೈಕೆಯಲ್ಲಿದ್ದ ಮಹಿಳೆಯನ್ನು ಆಘಾತಕಾರಿ ಹೇಳಿಕೆಗಳೊಂದಿಗೆ ವಾಪಸ್ ಕಳುಹಿಸಲಾಯಿತು ಎಂದು ಅವರ ಸಂಬಂಧಿ ವಕೀಲ ಮೆಹ್ಫುಜಾ ಖಾತುನ್ ಹೇಳಿದ್ದಾರೆ. ವೈದ್ಯರನ್ನು ಉಲ್ಲೇಖಿಸಿ, "ಕಾಶ್ಮೀರ ಘಟನೆಯ ನಂತರ, ನಾನು ಯಾವುದೇ ಮುಸ್ಲಿಂ ರೋಗಿಗಳನ್ನು ನೋಡಲು ಹೋಗುವುದಿಲ್ಲ" ಎಂದು ಖಾತುನ್ ಹೇಳಿದ್ದಾರೆ, ನಂತರ "ಹಿಂದೂಗಳು ನಿಮ್ಮ ಗಂಡನನ್ನು ಕೊಲ್ಲಬೇಕು, ಆಗ ಅವರಿಗೆ ಹೇಗೆ ಅನಿಸುತ್ತದೆ ಎಂದು ನಿಮಗೆ ಅರ್ಥವಾಗುತ್ತದೆ. ನಾವು ಎಲ್ಲಾ ಮುಸ್ಲಿಮರನ್ನು ನಿಷೇಧಿಸಬೇಕು" ಎಂಬಂತಹ ದ್ವೇಷಪೂರಿತ ಪದಗಳನ್ನು ಬಳಸಲಾಯಿತು. ಈ ಘಟನೆ ದೇಶಾದ್ಯಂತ, ವಿಶೇಷವಾಗಿ ಮುಸ್ಲಿಂ ಸಮುದಾಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಗರ್ಭಿಣಿ ಮಹಿಳೆಯ ಕೊನೆಯ ತ್ರೈಮಾಸಿಕದಲ್ಲಿ ಚಿಕಿತ್ಸೆ ನಿರಾಕರಿಸುವುದು ವೈದ್ಯಕೀಯ ಪದ್ಧತಿಯ ನೀತಿಯನ್ನು ಉಲ್ಲಂಘಿಸುವುದಲ್ಲದೆ, ತಾಯಿ ಮತ್ತು ಮಗುವಿನ ಜೀವಕ್ಕೂ ಅಪಾಯವನ್ನುಂಟು ಮಾಡುತ್ತದೆ. "ಅವಳು ಅಂದಿನಿಂದ ಅಳುತ್ತಿದ್ದಾಳೆ. ಅವಳು ಭಯಭೀತಳಾಗಿದ್ದಾಳೆ - ತನ್ನ ಸುರಕ್ಷತೆಗಾಗಿ ಮಾತ್ರವಲ್ಲ, ತನ್ನ ಹುಟ್ಟಲಿರುವ ಮಗುವಿನ ಸುರಕ್ಷತೆಗಾಗಿಯೂ ಸಹ," ಎಂದು ಖತುನ್ ಫೇಸ್ಬುಕ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ವೈರಲ್ ಆದ ಪೊಸ್ಟ್ನ್ನು ನೀವಿಲ್ಲಿ, ಇಲ್ಲಿ ನೋಡಬಹುದು.
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ಮುಸ್ಲಿಂ ಎಂಬ ಕಾರಣಕ್ಕೆ ಖಾತುನ್ ಎಂಬ ವ್ಯಕ್ತಿಗೆ ಡಾ. ಚಂಪಾಕಲಿ ಸರ್ಕಾರ್ ಅವರು ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ ಎಂಬ ಹೇಳಿಕೆ ಸುಳ್ಳು. ವಿಡಿಯೋವನ್ನು ಎಡಿಟ್ ಮಾಡಿ ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ.
ಏಪ್ರಿಲ್ 27, 2025ರಂದು ʼಇಂಡಿಯಾ ಟುಡೆʼ ವೆಬ್ಸೈಟ್ನಲ್ಲಿ ʼBengal Muslim woman denied treatment in wake of J&K attack, doctor denies chargeʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿರುವುದನ್ನು ನಾವಿಲ್ಲಿ ನೋಡಬಹುದು. ವರದಿಯಲ್ಲಿ ʼಕೊಂಕಣ ಖಾತುನ್ ಎಂಬ ಗರ್ಭಿಣಿ ಮಹಿಳೆ ಡಾ. ಚಂಪಾಕಲಿ ಸರ್ಕಾರ್, ಮಹಿಳಾ ಸ್ತ್ರೀರೋಗತಜ್ಞೆ ಧಾರ್ಮಿಕ ಪಕ್ಷಪಾತದಿಂದಾಗಿ ತನ್ನ ವೈದ್ಯಕೀಯ ಚಿಕಿತ್ಸೆಯನ್ನು ನಿರಾಕರಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಖತುನ್, ತನ್ನ ಪತಿ ಶೇಖ್ ಜೊತೆ ವಾಸಿಸುತ್ತಿದ್ದಾರೆ. ಘಟನೆಯ ನಂತರ ಪೊಲೀಸ್ ದೂರು ದಾಖಲಿಸಿದ್ದಾರೆ. ಡಾ. ಸರ್ಕಾರ್ ಅವರು ಮುಸ್ಲಿಂ ಎಂಬ ಕಾರಣಕ್ಕೆ ಖಾತುನ್ಗೆ ಚಿಕಿತ್ಸೆ ನಿರಾಕರಿಸಿದ್ದಾರೆ ಎಂದು ಹೇಳುವ ಫೋಟೋ ಮತ್ತು ಆಡಿಯೋ ಸಂದೇಶ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವಿವಾದ ಆರಂಭವಾಯಿತು. ಈ ಸಂದೇಶವು ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಈ ಘಟನೆಯನ್ನು ಲಿಂಕ್ ಮಾಡಿ ತಪ್ಪಾಗಿ ಹಂಚಿಕೊಳ್ಳಲಾಗಿದೆ. ಈ ಗಂಭೀರ ಆರೋಪಗಳಿಗೆ ಪ್ರತಿಕ್ರಿಯೆಯಾಗಿ, ಡಾ. ಸರ್ಕಾರ್ ಈ ಆರೋಪಗಳನ್ನು ನಿರಾಕರಿಸಿದರು. ಅವರು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಎಡಿಟ್ ಮಾಡಿ ಹಂಚಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ತಮ್ಮ 30 ವರ್ಷಗಳ ವೈದ್ಯಕೀಯ ಸೇವೆಯಲ್ಲಿ ಯಾವುದೇ ರೋಗಿಯ ವಿರುದ್ಧ ತಾನು ಎಂದಿಗೂ ತಾರತಮ್ಯ ಮಾಡಿಲ್ಲ ಎಂದು ಅವರು ಹೇಳಿದರು. ಸುಳ್ಳು ಸಂದೇಶದ ಹಿಂದಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಯೋಜಿಸುತ್ತಿರುವುದಾಗಿ ಡಾ. ಸರ್ಕಾರ್ ಹೇಳಿದ್ದಾರೆ.
ಸಿಯಾಸಟ್.ಕಾಂ ಎಂಬ ವೆಬ್ಸೈಟ್ನಲ್ಲಿ ʼKolkata doctor denies discrimination over religion, calls audio ‘fake’ʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಲಾಗಿದೆ. ವರದಿಯಲ್ಲಿ ʼಗರ್ಭಿಣಿ ಮಹಿಳೆ ವೈದ್ಯ ಚಂಪಾಕಲಿ ಸರ್ಕಾರ್ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದು, ಅವರು ವೈದ್ಯಕೀಯ ಚಿಕಿತ್ಸೆ ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ. ದೂರವಾಣಿ ಸಂಭಾಷಣೆಯ ಮೂಲಕ, ವೈದ್ಯರು ಮಹಿಳೆಗೆ ಚಿಕಿತ್ಸೆಗಾಗಿ ಮಸೀದಿ ಅಥವಾ ಮದರಸಾಕ್ಕೆ ಹೋಗುವಂತೆ ಹೇಳಿದರು ಮತ್ತು ಅವರು ಭಯೋತ್ಪಾದನೆಯೊಂದಿಗೆ ಸಂಬಂಧ ಹೊಂದಿದ್ದಾರೆಂದು ಹೇಳಿದರು. ಈ ಫೋನ್ ಸಂಭಾಷಣೆಯನ್ನು ಆನ್ಲೈನ್ನಲ್ಲಿ ಪೋಸ್ಟ್ ಮಾಡಲಾಗಿದ್ದು, ಅದು ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿದ್ದು, ನೆಟಿಜನ್ಗಳಿಂದ ತೀವ್ರ ಟೀಕೆಗೆ ಗುರಿಯಾಗಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಡಾ. ಸರ್ಕಾರ್ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿ ತಮ್ಮ ವಿರುದ್ಧದ ಆರೋಪಗಳು ಸುಳ್ಳು ಎಂದು ಹೇಳಿದ್ದಾರೆ. ಆಡಿಯೊ ಸಂದೇಶವನ್ನು ತಿರುಚಲಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. "ನನ್ನ 30 ವರ್ಷಗಳ ವೈದ್ಯಕೀಯ ವೃತ್ತಿಜೀವನದಲ್ಲಿ, ನಾನು ಎಂದಿಗೂ ಧಾರ್ಮಿಕ ಗುರುತಿನ ಆಧಾರದ ಮೇಲೆ ತಾರತಮ್ಯ ಮಾಡಿಲ್ಲ. ನನ್ನ ಎಲ್ಲಾ ರೋಗಿಗಳಿಗೆ ನಾನು ಸಮಾನ ಆದ್ಯತೆ ನೀಡುತ್ತೇನೆ. ನನ್ನ ದೃಷ್ಟಿಯಲ್ಲಿ ಜಾತಿ, ಧರ್ಮ ಮತ್ತು ಜನಾಂಗದ ಮೌಲ್ಯವಿಲ್ಲ. ರೋಗಿಗಳಿಗೆ ಸರಿಯಾಗಿ ಮತ್ತು ನೈತಿಕವಾಗಿ ಚಿಕಿತ್ಸೆ ನೀಡಲು ನಾನು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ. ಕೆಲವು ಜನರು ನನ್ನೊಂದಿಗೆ ಸಮಸ್ಯೆಯನ್ನು ಹೊಂದಿದ್ದರು. ವಿಷಯವನ್ನು ಹಂಚಿಕೊಂಡಿದ್ದಕ್ಕೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ನಾನು ನಿರ್ಧರಿಸಿದ್ದೇನೆ" ಎಂದು ಅವರು ವೀಡಿಯೊದಲ್ಲಿ ಹೇಳಿದ್ದಾರೆ.ʼ
ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆದ ಸುದ್ದಿ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ಮುಸ್ಲಿಂ ಎಂಬ ಕಾರಣಕ್ಕೆ ಖಾತುನ್ ಎಂಬ ವ್ಯಕ್ತಿಗೆ ಡಾ. ಚಂಪಾಕಲಿ ಸರ್ಕಾರ್ ಅವರು ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ ಎಂಬ ಹೇಳಿಕೆ ಸುಳ್ಳು. ವಿಡಿಯೋವನ್ನು ಎಡಿಟ್ ಮಾಡಿ ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ.